News

...N.B.:-Up gradation of our BLOG depends on the availability of INTERNET ...

Saturday, November 15, 2014

"ನೆಹರೂ ಜಯಂತಿ"ಯ ಅಂಗವಾಗಿ ರಕ್ಷಕರ ತಿಳುವಳಿಕಾ ಶಿಬಿರವನ್ನು ಆಯೋಜಿಸಲಾಗಿದ್ದು ವಾರ್ಡ್ ಸದಸ್ಯ ಶ್ರೀ ಅಬೂಬಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ನಾಗರಾಜ ಅಧ್ಯಕ್ಷತೆ ವಹಿಸಿದ್ದರು . ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಶ್ರೀಹರಿ ಭಟ್ ಭಾಗವಹಿಸಿದ್ದರು


Saturday, November 8, 2014

ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕ್ರೀಡಾಕೂಟವು ನಮ್ಮ ಶಾಲೆಯಲ್ಲಿ ನವಂಬರ್ ೫ ರಿಂದ ೭ರ ವರೆಗೆ ಜರಗಿತು . ಕ್ರೀಡಾಜ್ಯೋತಿಯನ್ನು ಅಗಲ್ಪಾಡಿ ದೇವಸ್ಥಾನದ ವಠಾರದಿಂದ ಚಂಡೆಮೇಳದೊಂದಿಗೆ ತರಲಾಯಿತು . ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸಮೂರ್ತಿ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಕುಮ್ಬ್ಡಾಜೆ  ಗ್ರಾ . ಪಂ . ಸದಸ್ಯ ರವೀಂದ್ರ  ರೈ ಗೋಸಾಡ ,ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ ಭಟ್ ,ಮುಖ್ಯಶಿಕ್ಷಕ ಶ್ರೀ ನಾಗರಾಜ , ಕ್ರೀಡಾಕೂಟದ  ಪ್ರಧಾನ  ಕಾರ್ಯದರ್ಶಿ ಶ್ರೀ ಶಶಿಕಾಂತ ಬಲ್ಲಾಳ್ ,ಪಿ ಟಿ ಎ . ಅಧ್ಯಕ್ಷ  ಶ್ರೀ ಗಣರಾಜ ,ಹರೀಶ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದರು