News

...N.B.:-Up gradation of our BLOG depends on the availability of INTERNET ...

Monday, October 13, 2014


ಕುಂಬ್ಳೆ  ಉಪಜಿಲ್ಲಾ  ಕ್ರೀಡಾ  ಕೂಟ - ಸಮಿತಿಗಳ ರೂಪೀಕರಣ

ಅಗಲ್ಪಾಡಿ  ಅಕ್ಟೋಬರ್ 13 :ಕುಂಬ್ಳೆ  ಉಪಜಿಲ್ಲಾ  ಮಟ್ಟದ  ಕ್ರೀಡಾ  ಕೂಟವು  ನವೆಂಬರ್  ತಿಂಗಳ 5 ,6 , 7 ತರೀಕುಗಳಲ್ಲಾಗಿ ಅಗಲ್ಪಾಡಿ  ಶ್ರೀ  ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಡ  ಶಾಲೆಯಲ್ಲಿ  ನಡೆಯಲಿದೆ . ಇದನ್ನು ಯಶಸ್ವಿಯಾಗಿ  ನಡೆಸುವ  ಸಲುವಾಗಿ ವಿವಿಧ  ಸಮಿತಿಗಳ  ರೂಪೀಕರಣವು ಅಗಲ್ಪಾಡಿ  ಶಾಲೆಯಲ್ಲಿ  ನಡೆಯಿತು . ಕುಂಬ್ಳೆ   ಉಪಜಿಲ್ಲಾ  ಎ  . ಇ . ಓ  ಶ್ರೀ ಕೈಲಾಸ್   ಮೂರ್ತಿಯವರ  ನೇತ್ರತ್ವದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ,ಪ್ರಿನ್ಸಿಪಾಲರಾದ ಶ್ರೀ  ಶ್ರೀನಿವಾಸ  ಭಟ್ ,ಮುಖ್ಯೋಪಾಧ್ಯಾಯರಾದ  ಶ್ರೀ  ಬಿ  ನಾಗರಾಜಾ ,ಪಿ . ಟಿ . ಎ  ಅದ್ಯಕ್ಷರಾದ  ಶ್ರೀ ಗಣರಾಜ ,ಮತ್ತು    ಕುಂಬ್ಳೆ   ಉಪಜಿಲ್ಲೆಯ ಶಾಲೆಗಳಿಂದ ಬಂದ  ಅಧ್ಯಾಪಕರು ,ಪಂಚಾಯತ್  ಪ್ರತಿಹಿನಿಧಿಗಳು ಹಾಗೂ  ವಿವಿಧ  ಕ್ಲಬ್ಬುಗಳ  ಪದಾಧಿಕಾರಿಗಳು ಹಾಜರಿದ್ದರು .



Saturday, October 4, 2014

ಒಕ್ಟೋಬರ್ 2:
     ಗಾಂಧೀ ಜಯಂತಿಯ ಅಂಗವಾಗಿ "ಸ್ವಚ್ ಭಾರತ್ " ಆಂದೋಲನದ ಉದ್ಘಾಟನೆಯನ್ನು ಪಿ.ಟಿ. ಎ. ಅಧ್ಯಕ್ಷರಾದ ಶ್ರೀ ಗಣರಾಜ . ಕೆ. ಇವರು ನೆರವೇರಿಸಿದರು.ಇದರ ಮಹತ್ವವನ್ನು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಶಾಲಾಪರಿಸರವನ್ನು ಶುಚಿಗೊಳಿಸಿದರು.





Tuesday, September 30, 2014

ಸಾಕ್ಷರತಾ ಶಿಬಿರ   27/09/2014

        27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ    ಜರಗಿತು.  




  ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ  ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು. 

Thursday, September 25, 2014

ನೂತನ ಶಾಲಾ ಬ್ಲಾಗ್  ಉದ್ಘಾಟನೆ 
25/09/2014 ನೆ  ಗುರುವಾರ ವಾರ್ಡ್ ಸದಸ್ಯ ಶ್ರೀ ಯಂ . ಅಬೂಬಕ್ಕರ್ ಇವರಿಂದ ಉದ್ಘಾಟನೆಗೊಂಡಿತು . ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣರಾಜ ಇವರು ಶುಭ ಹಾರೈಸಿದರು. ಶಾಲಾಮುಖ್ಯೋಪಧ್ಯಾಯರಾದ ಶ್ರೀ ಬಿ ನಾಗರಾಜ ಉಪಸ್ಥಿತರಿದ್ದರು.


Wednesday, September 24, 2014


ಶ್ರೀ ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಢ  ಶಾಲೆ  ಅಗಲ್ಪಾಡಿ : ಮಂಗಳಯಾನ  ಯಶಸ್ವಿಗೆ ಶ್ರಮಿಸಿದ  ವಿಜ್ಞಾನಿಗಳಿಗೆ  ಶಾಲಾ  ಅಸೆಂಬ್ಲಿಯಲ್ಲಿ  ಅಭಿನಂದನೆ  ಸಲ್ಲಿಸಲಾಯಿತು

Wednesday, September 17, 2014

                 ಸೆ ಪ್ಟಂಬರ್  ೫  ಓಣಂ ದಿನಾಚರಣೆ 
 ಓಣಂ ಹಬ್ಬವನ್ನು  ಪೂಕಳಂ  ಹಾಗೂ ಇನ್ನಿತರ  ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು . ಓಣಂ ಔತಣ ಕೂಟವನ್ನು  ಆಯೋಜಿಸಲಾಗಿತ್ತು . 




Monday, August 25, 2014

     
   23/08/2014 ರಂದು M SC H S Nirchal ನಲ್ಲಿ  ಜರಗಿದ  ಕುಂಬ್ಳೆ  ಉಪಜಿಲ್ಲಾ ಮಟ್ಟದ ಬ್ಯಾಡ್ ಮಿಂಟನ್  ಪಂದ್ಯಾಟದಲ್ಲಿ ಸೀನಿಯರ್ ಹುಡುಗಿಯರ , ಜೂನಿಯರ್ ಹುಡುಗಿಯರ  ಮತ್ತು ಜೂನಿಯರ್ ಹುಡುಗರ ವಿಭಾಗದಲ್ಲಿ ದ್ವಿತೀಯ ಸ್ಥಾನ    ಪಡೆದಿರುತ್ತಾರೆ .








21/08/2014 ರಂದು S N H S PERLA ದಲ್ಲಿ  ಜರಗಿದ  ಕುಂಬ್ಳೆ  ಉಪಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸೀನಿಯರ್ ಹುಡುಗರ  ವಿಭಾಗದಲ್ಲಿ ನಮ್ಮ ಶಾಲೆಯ  7ನೆ  ತರಗತಿಯ  ಗೌರೀಶ ಜಿ  , ಸೀನಿಯರ್ ಹುಡುಗಿಯರ ವಿಭಾಗದಲ್ಲಿ  10ನೆ  ತರಗತಿಯ ಭಾಗ್ಯಪ್ರಿಯ  ,ಜೂನಿಯರ್  ವಿಭಾಗದಲ್ಲಿ 10ನೆ  ತರಗತಿಯ ಶ್ರಾವ್ಯಸಾವಿತ್ರಿ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 8ನೆ  ತರಗತಿಯ ಗಗನ್ ಭಾರದ್ವಾಜ್  ಪ್ರಥಮ ಸ್ಥಾನ    ಪಡೆದಿರುತ್ತಾರೆ .