Saturday, November 15, 2014
Saturday, November 8, 2014
ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕ್ರೀಡಾಕೂಟವು ನಮ್ಮ ಶಾಲೆಯಲ್ಲಿ ನವಂಬರ್ ೫ ರಿಂದ ೭ರ ವರೆಗೆ ಜರಗಿತು . ಕ್ರೀಡಾಜ್ಯೋತಿಯನ್ನು ಅಗಲ್ಪಾಡಿ ದೇವಸ್ಥಾನದ ವಠಾರದಿಂದ ಚಂಡೆಮೇಳದೊಂದಿಗೆ ತರಲಾಯಿತು . ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸಮೂರ್ತಿ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಕುಮ್ಬ್ಡಾಜೆ ಗ್ರಾ . ಪಂ . ಸದಸ್ಯ ರವೀಂದ್ರ ರೈ ಗೋಸಾಡ ,ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ ಭಟ್ ,ಮುಖ್ಯಶಿಕ್ಷಕ ಶ್ರೀ ನಾಗರಾಜ , ಕ್ರೀಡಾಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಶಶಿಕಾಂತ ಬಲ್ಲಾಳ್ ,ಪಿ ಟಿ ಎ . ಅಧ್ಯಕ್ಷ ಶ್ರೀ ಗಣರಾಜ ,ಹರೀಶ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದರು
Monday, October 13, 2014
ಕುಂಬ್ಳೆ ಉಪಜಿಲ್ಲಾ ಕ್ರೀಡಾ ಕೂಟ - ಸಮಿತಿಗಳ ರೂಪೀಕರಣ
ಅಗಲ್ಪಾಡಿ ಅಕ್ಟೋಬರ್ 13 :ಕುಂಬ್ಳೆ ಉಪಜಿಲ್ಲಾ ಮಟ್ಟದ ಕ್ರೀಡಾ
ಕೂಟವು ನವೆಂಬರ್ ತಿಂಗಳ 5 ,6 , 7 ತರೀಕುಗಳಲ್ಲಾಗಿ ಅಗಲ್ಪಾಡಿ ಶ್ರೀ
ಅನ್ನಪೂರ್ಣೇಶ್ವರಿ ಹಿರಿಯ ಪ್ರೌಡ ಶಾಲೆಯಲ್ಲಿ ನಡೆಯಲಿದೆ . ಇದನ್ನು ಯಶಸ್ವಿಯಾಗಿ
ನಡೆಸುವ ಸಲುವಾಗಿ ವಿವಿಧ ಸಮಿತಿಗಳ ರೂಪೀಕರಣವು ಅಗಲ್ಪಾಡಿ ಶಾಲೆಯಲ್ಲಿ ನಡೆಯಿತು
. ಕುಂಬ್ಳೆ ಉಪಜಿಲ್ಲಾ ಎ . ಇ . ಓ ಶ್ರೀ ಕೈಲಾಸ್ ಮೂರ್ತಿಯವರ ನೇತ್ರತ್ವದಲ್ಲಿ
ನಡೆದ ಈ ಕಾರ್ಯಕ್ರಮದಲ್ಲಿ ,ಪ್ರಿನ್ಸಿಪಾಲರಾದ ಶ್ರೀ ಶ್ರೀನಿವಾಸ
ಭಟ್ ,ಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜಾ ,ಪಿ . ಟಿ . ಎ ಅದ್ಯಕ್ಷರಾದ ಶ್ರೀ
ಗಣರಾಜ ,ಮತ್ತು ಕುಂಬ್ಳೆ ಉಪಜಿಲ್ಲೆಯ ಶಾಲೆಗಳಿಂದ ಬಂದ ಅಧ್ಯಾಪಕರು ,ಪಂಚಾಯತ್
ಪ್ರತಿಹಿನಿಧಿಗಳು ಹಾಗೂ ವಿವಿಧ ಕ್ಲಬ್ಬುಗಳ ಪದಾಧಿಕಾರಿಗಳು ಹಾಜರಿದ್ದರು .
Tuesday, September 30, 2014
ಸಾಕ್ಷರತಾ ಶಿಬಿರ 27/09/2014
27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ ಜರಗಿತು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು.
Subscribe to:
Posts (Atom)










