News

...N.B.:-Up gradation of our BLOG depends on the availability of INTERNET ...

Thursday, December 25, 2014

SSLC Examination March 2015

SSLC EXAMINATION OF THIS YEAR WILL BEGIN ON 9TH MARCH 2015

HAPPY NEW YEAR

HAPPY NEW YEAR FOR ALL  STAFF AND STUDENTS AND NON TEACHING STAFF FOR 2015
 HEADMASTER

Saturday, November 15, 2014

"ನೆಹರೂ ಜಯಂತಿ"ಯ ಅಂಗವಾಗಿ ರಕ್ಷಕರ ತಿಳುವಳಿಕಾ ಶಿಬಿರವನ್ನು ಆಯೋಜಿಸಲಾಗಿದ್ದು ವಾರ್ಡ್ ಸದಸ್ಯ ಶ್ರೀ ಅಬೂಬಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ನಾಗರಾಜ ಅಧ್ಯಕ್ಷತೆ ವಹಿಸಿದ್ದರು . ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಶ್ರೀಹರಿ ಭಟ್ ಭಾಗವಹಿಸಿದ್ದರು


Saturday, November 8, 2014

ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕ್ರೀಡಾಕೂಟವು ನಮ್ಮ ಶಾಲೆಯಲ್ಲಿ ನವಂಬರ್ ೫ ರಿಂದ ೭ರ ವರೆಗೆ ಜರಗಿತು . ಕ್ರೀಡಾಜ್ಯೋತಿಯನ್ನು ಅಗಲ್ಪಾಡಿ ದೇವಸ್ಥಾನದ ವಠಾರದಿಂದ ಚಂಡೆಮೇಳದೊಂದಿಗೆ ತರಲಾಯಿತು . ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸಮೂರ್ತಿ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಕುಮ್ಬ್ಡಾಜೆ  ಗ್ರಾ . ಪಂ . ಸದಸ್ಯ ರವೀಂದ್ರ  ರೈ ಗೋಸಾಡ ,ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ ಭಟ್ ,ಮುಖ್ಯಶಿಕ್ಷಕ ಶ್ರೀ ನಾಗರಾಜ , ಕ್ರೀಡಾಕೂಟದ  ಪ್ರಧಾನ  ಕಾರ್ಯದರ್ಶಿ ಶ್ರೀ ಶಶಿಕಾಂತ ಬಲ್ಲಾಳ್ ,ಪಿ ಟಿ ಎ . ಅಧ್ಯಕ್ಷ  ಶ್ರೀ ಗಣರಾಜ ,ಹರೀಶ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದರು

Monday, October 13, 2014


ಕುಂಬ್ಳೆ  ಉಪಜಿಲ್ಲಾ  ಕ್ರೀಡಾ  ಕೂಟ - ಸಮಿತಿಗಳ ರೂಪೀಕರಣ

ಅಗಲ್ಪಾಡಿ  ಅಕ್ಟೋಬರ್ 13 :ಕುಂಬ್ಳೆ  ಉಪಜಿಲ್ಲಾ  ಮಟ್ಟದ  ಕ್ರೀಡಾ  ಕೂಟವು  ನವೆಂಬರ್  ತಿಂಗಳ 5 ,6 , 7 ತರೀಕುಗಳಲ್ಲಾಗಿ ಅಗಲ್ಪಾಡಿ  ಶ್ರೀ  ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಡ  ಶಾಲೆಯಲ್ಲಿ  ನಡೆಯಲಿದೆ . ಇದನ್ನು ಯಶಸ್ವಿಯಾಗಿ  ನಡೆಸುವ  ಸಲುವಾಗಿ ವಿವಿಧ  ಸಮಿತಿಗಳ  ರೂಪೀಕರಣವು ಅಗಲ್ಪಾಡಿ  ಶಾಲೆಯಲ್ಲಿ  ನಡೆಯಿತು . ಕುಂಬ್ಳೆ   ಉಪಜಿಲ್ಲಾ  ಎ  . ಇ . ಓ  ಶ್ರೀ ಕೈಲಾಸ್   ಮೂರ್ತಿಯವರ  ನೇತ್ರತ್ವದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ,ಪ್ರಿನ್ಸಿಪಾಲರಾದ ಶ್ರೀ  ಶ್ರೀನಿವಾಸ  ಭಟ್ ,ಮುಖ್ಯೋಪಾಧ್ಯಾಯರಾದ  ಶ್ರೀ  ಬಿ  ನಾಗರಾಜಾ ,ಪಿ . ಟಿ . ಎ  ಅದ್ಯಕ್ಷರಾದ  ಶ್ರೀ ಗಣರಾಜ ,ಮತ್ತು    ಕುಂಬ್ಳೆ   ಉಪಜಿಲ್ಲೆಯ ಶಾಲೆಗಳಿಂದ ಬಂದ  ಅಧ್ಯಾಪಕರು ,ಪಂಚಾಯತ್  ಪ್ರತಿಹಿನಿಧಿಗಳು ಹಾಗೂ  ವಿವಿಧ  ಕ್ಲಬ್ಬುಗಳ  ಪದಾಧಿಕಾರಿಗಳು ಹಾಜರಿದ್ದರು .



Saturday, October 4, 2014

ಒಕ್ಟೋಬರ್ 2:
     ಗಾಂಧೀ ಜಯಂತಿಯ ಅಂಗವಾಗಿ "ಸ್ವಚ್ ಭಾರತ್ " ಆಂದೋಲನದ ಉದ್ಘಾಟನೆಯನ್ನು ಪಿ.ಟಿ. ಎ. ಅಧ್ಯಕ್ಷರಾದ ಶ್ರೀ ಗಣರಾಜ . ಕೆ. ಇವರು ನೆರವೇರಿಸಿದರು.ಇದರ ಮಹತ್ವವನ್ನು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಶಾಲಾಪರಿಸರವನ್ನು ಶುಚಿಗೊಳಿಸಿದರು.





Tuesday, September 30, 2014

ಸಾಕ್ಷರತಾ ಶಿಬಿರ   27/09/2014

        27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ    ಜರಗಿತು.  




  ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ  ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು.